ಒಂದು ವೇಳೆ ನನಗೆ ಅದೃಷ್ಟವಿಲ್ಲದೊಡೆ
ನಿನ್ನನ್ನು ಈ ಜೀವನದಲ್ಲಿ ಭೇಟಿಯಾಗಲು
ನಿನ್ನ ನೋಡಲು ಆಗಲಿಲ್ಲವೆಂಬ ಭಾವನೆ ನನ್ನಲ್ಲಿ ಆಗಲಿ
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ದಟ್ಟಣೆಯಿಂದ ಕೂಡಿದ ಈ ಜೀವನ ಸಂತೆಯಲ್ಲಿ
ನನ್ನ ದಿನಗಳು ಮುಗಿಯುತ್ತಿದೆ ಮತ್ತು
ನನ್ನ ಕೈಯಲ್ಲಿ ತುಂಬಿದೆ ದಿನದ ವಹಿವಾಟಿನ ಲಾಭದ ಗಳಿಕೆ
ನನಗೆಂದೂ ಅನಿಸದೇಯಿರಲಿ ನಾನೇನನ್ನೂ ಗಳಿಸಲಿಲ್ಲವೆಂದು
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ನಾನು ಯಾವಾಗ ಏದುಸಿರುಬಿಡುತ್ತಾ ಸುಸ್ತಾಗಿ
ರಸ್ತೆಬದಿಯಲ್ಲಿ ಕುಳಿತಿರಲು, ಮಣ್ಣಿನ ಧೂಳಿನ ಕೆಳಸ್ತರದಲ್ಲಿ
ನನ್ನ ಹಾಸಿಗೆ ಹಾಸಿರಲು
ನನಗನಿಸಲಿ ಇನ್ನೂ ಬಹಳ ದೂರದ ದಾರಿಯ ಪಯಣ ಬಾಕಿಯಿದೆಯೆಂದು
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ಯಾವಾಗ ನನ್ನ ಕೋಣೆಯನ್ನು ಶೃಂಗಾರ ಮಾಡಿರಲಾಗಿ
ಮತ್ತು ಕೊಳಲ ದನಿ ಹಾಗೂ ನಗುವಿನ ಸಪ್ಪಳ ತುಂಬಿರಲು
ನನಗೆ ಅನಿಸಲಿ ನಾನು ಯಾರನ್ನೂ ನನ್ನ ಮನೆಗೆ ಆಹ್ವಾನಿಸಿಲ್ಲವೆಂದು
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ಪ್ರೇರಣೆ: Let me not forget by Rabindranath Tagore
Ravindranath Tagore Poems
ಬುಧವಾರ, ಸೆಪ್ಟೆಂಬರ್ 22, 2010
ಹೂವು
ಕಿತ್ತುಕೊಳ್ಳಿ ಈ ಸಣ್ಣ ಹೂವನ್ನು ತಡಮಾಡದೆ
ನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\
ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆ
ಆದರೆ ಗೌರವಿಸೋಣ, ನೋವಿನ ಕೈಗಳಿಂದ
ಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆ
ಸಮರ್ಪಿಸುವ ಕಾಲ ಕಳೆದುಹೋಗುವುದೇನೋ
ಎಂಬ ಭಯವಿದೆ ಆಗದ ಹಾಗೆ ನೋಡಿಕೋ\\
ಅದರ ಬಣ್ಣಗೆಟ್ಟಿದ್ದರೂ, ವಾಸನೆ ಕ್ಷೀಣವಾಗಿದ್ದರೂ
ಆ ಹೂವನ್ನು ಅವನ ಸೇವೆಗಾಗಿಯೇ ಕಿತ್ತುಕೊಳ್ಳಿ
ಇನ್ನೂ ಬಹಳಷ್ಟು ಕಾಲವಿದೆಯೆಂದು ವಿಳಂಬ ಮಾಡಬೇಡಿ\\
ಪ್ರೇರಣೆ: Flower by Rabindranatha Tagore
ನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\
ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆ
ಆದರೆ ಗೌರವಿಸೋಣ, ನೋವಿನ ಕೈಗಳಿಂದ
ಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆ
ಸಮರ್ಪಿಸುವ ಕಾಲ ಕಳೆದುಹೋಗುವುದೇನೋ
ಎಂಬ ಭಯವಿದೆ ಆಗದ ಹಾಗೆ ನೋಡಿಕೋ\\
ಅದರ ಬಣ್ಣಗೆಟ್ಟಿದ್ದರೂ, ವಾಸನೆ ಕ್ಷೀಣವಾಗಿದ್ದರೂ
ಆ ಹೂವನ್ನು ಅವನ ಸೇವೆಗಾಗಿಯೇ ಕಿತ್ತುಕೊಳ್ಳಿ
ಇನ್ನೂ ಬಹಳಷ್ಟು ಕಾಲವಿದೆಯೆಂದು ವಿಳಂಬ ಮಾಡಬೇಡಿ\\
ಪ್ರೇರಣೆ: Flower by Rabindranatha Tagore
ಸೋಮವಾರ, ಆಗಸ್ಟ್ 2, 2010
-ಆಂತರ್ಯ-
ಹೃದಯದಾಳದಲ್ಲಿ ವಿರಾಜಿಸುತಿರುವನು
ಅವನ ಸ್ಪರ್ಶದಿಂದಲೇ ನನ್ನತನವು ಜಾಗೃತಗೊಂಡಿತು
ಅವನೇ ನನ್ನೊಳಗಿನ ಆಂತರ್ಯ\\
ಈ ಕಂಗಳ ಮೇಲೆ ಮೋಡಿಮಾಡುವವನು
ಎನ್ನೆದೆಯ ಹೃದಯದ ಭಾವತಂತುಗಳ
ಸಂತೋಷದಿ ನುಡಿಸುವವನು
ಸಂತೋಷ ಹಾಗೂ ಸಂಕಟಗಳಿಗನುಗುಣವಾಗಿ
ಸ್ವರಗತಿಯ ಬದಲಿಸುವವನು\\
ಮಾಯೆಯೆನ್ನುವ ಜೇಡರಬಲೆಯ ನೇಯುವವನು
ಚಿನ್ನ ,ಬೆಳ್ಳಿ,ಬಡತನ ಹಾಗೂ ಸಮೃದ್ದಿಯ ಕ್ಷಣಿಕತೆಯ ತಳುಕುಹಾಕುವವನು
ಕಳ್ಳನೋಟಬೀರಿ ಕಾಲ ಬುಡದಲ್ಲಿ ಶರಣಾಗುವಂತೆ ಮಾಡುವವನು
ಸ್ಪರ್ಶದಿಂದಲೇ ಎಲ್ಲವನ್ನೂ ಮರೆಯುವಂತೆ ಮಾಡುವವನು\\
ದಿನಗಳು ಬಂದವು, ವಯಸ್ಸು ಜಾರಿತು
ನನ್ನ ಹೃದಯದ ಚೈತನ್ಯದ ನಿರಂತತೆಯಲ್ಲಿ
ಹಲವು ಹೆಸರುಗಳು,ಹಲವು ಗೊತ್ತಿಲ್ಲದ ರೂಪಗಳು
ಸಂತೋಷ ಹಾಗೂ ಸಂಕಟದ ಭಾವಾವೆಶಗಳಲ್ಲಿ
ನಿರಂತರ ನನ್ನೊಡನಿದ್ದು ನಡೆಸುವವನು\\
ಪ್ರೇರಣೆ:"Innermost one" by Rabindranatha Tagore
ಭಾನುವಾರ, ಆಗಸ್ಟ್ 1, 2010
-ಕೊಡು ಶಕ್ತಿ-
ಇದು ನನ್ನ ಪ್ರಾರ್ಥನೆ ನಿನ್ನಲ್ಲಿ ಓ ನನ್ನ ದೇವರೇ!
ಹೊಡಿ ಹೊಡಿ ಬಲವಾಗಿ ಹೊಡಿ
ನನ್ನ ಹೃದಯದ ಬಡತನದ ಬೇರಿಗೆ\\
ಕೊಡು ಶಕ್ತಿ ಸಹಿಸಲು ನನ್ನ ಸಂತೋಷ ಹಾಗೂ ದುಃಖ;
ಕೊಡು ಶಕ್ತಿ ಸೇವೆಯಲ್ಲಿ ನನ್ನ ಪ್ರೀತಿ ಹಣ್ಣಾಗಲು;
ಕೊಡು ಶಕ್ತಿ ಬಡವರ ಸೇವೆ ಮಾಡಲು;
ತಲೆಬಾಗದಂತೆ ಮಾಡು ದರ್ಪ ಹಾಗೂ ಅಹಂಕಾರಕ್ಕೆ;
ಕೊಡು ಶಕ್ತಿ ಪ್ರತಿದಿನದ ಜಂಜಾಟಗಳನ್ನು ಎದುರಿಸಲು;
ಕೊಡು ಶಕ್ತಿ ನನ್ನ ಶಕ್ತಿಯನ್ನು ನಿನ್ನಲ್ಲಿ ಶರಣಾಗಿಸಲು;
ಪ್ರೇರಣೆ:"Give me strength" by Rabindranatha Tagore
ಹೊಡಿ ಹೊಡಿ ಬಲವಾಗಿ ಹೊಡಿ
ನನ್ನ ಹೃದಯದ ಬಡತನದ ಬೇರಿಗೆ\\
ಕೊಡು ಶಕ್ತಿ ಸಹಿಸಲು ನನ್ನ ಸಂತೋಷ ಹಾಗೂ ದುಃಖ;
ಕೊಡು ಶಕ್ತಿ ಸೇವೆಯಲ್ಲಿ ನನ್ನ ಪ್ರೀತಿ ಹಣ್ಣಾಗಲು;
ಕೊಡು ಶಕ್ತಿ ಬಡವರ ಸೇವೆ ಮಾಡಲು;
ತಲೆಬಾಗದಂತೆ ಮಾಡು ದರ್ಪ ಹಾಗೂ ಅಹಂಕಾರಕ್ಕೆ;
ಕೊಡು ಶಕ್ತಿ ಪ್ರತಿದಿನದ ಜಂಜಾಟಗಳನ್ನು ಎದುರಿಸಲು;
ಕೊಡು ಶಕ್ತಿ ನನ್ನ ಶಕ್ತಿಯನ್ನು ನಿನ್ನಲ್ಲಿ ಶರಣಾಗಿಸಲು;
ಪ್ರೇರಣೆ:"Give me strength" by Rabindranatha Tagore
ಮಂಗಳವಾರ, ಜುಲೈ 27, 2010
-ವಿದಾಯ-
ನನಗೆ ರಜೆ ದೊರಕಿದೆ;
ನನಗೆ ಅಪ್ಪಣೆ ಕೊಡಿ ವಿದಾಯ ಹೇಳಲು ನನ್ನ ಸೋದರರೇ
ನಾನು ನಿಮಗೆಲ್ಲರಿಗೂ ನಮಸ್ಕರಿಸುವೆ ಇಲ್ಲಿಂದ ಹೊರಡಲು\\
ಇಲ್ಲಿ ನಾನು ಕೊಡುತಿಹೆನು ನನ್ನ ಮನೆಯ ಬಾಗಿಲ ಬೀಗದ ಕೈಗಳನು
ಮತ್ತು ನನ್ನ ಮನೆಯ ಹಕ್ಕುಗಳೆಲ್ಲವನ್ನು ಬಿಟ್ಟುಕೊಡುತ್ತಿದ್ದೇನೆ
ನಾನು ನಿಮ್ಮಂದ ಒಳ್ಳೆಯ ಮಾತುಗಳನ್ನು ಮಾತ್ರ ಕೇಳಲಿಚ್ಚಿಸುತ್ತೇನೆ\\
ನಾವುಗಳು ಬಹುಕಾಲ ನೆರೆಹೊರೆಯವರಾಗಿದ್ದೆವು
ಆದರೆ ನಾನು ಕೊಡುವುದಕ್ಕಿಂತ ನಿಮ್ಮಿಂದ ಹೆಚ್ಚಾಗಿಯೇ ಪಡೆದಿದ್ದೇನೆ
ದಿನಗಳು ಕಳೆದುಹೋಗಿದೆ
ಮತ್ತು ನನ್ನ ಕತ್ತಲ ಕೋಣೆಯ ಹಣತೆ ಹೊರಟುಹೋಗಿದೆ
ಕರೆ ಬಂದಿದೆ ಹಾಗೂ ನಾನು ಸನ್ನದ್ದನಾಗಿದ್ದೇನೆ ನನ್ನ ಪಯಣಕ್ಕೆ\\
ಪ್ರೇರಣೆ:"Farewell" by Rabindranatha Tagore
ನನಗೆ ಅಪ್ಪಣೆ ಕೊಡಿ ವಿದಾಯ ಹೇಳಲು ನನ್ನ ಸೋದರರೇ
ನಾನು ನಿಮಗೆಲ್ಲರಿಗೂ ನಮಸ್ಕರಿಸುವೆ ಇಲ್ಲಿಂದ ಹೊರಡಲು\\
ಇಲ್ಲಿ ನಾನು ಕೊಡುತಿಹೆನು ನನ್ನ ಮನೆಯ ಬಾಗಿಲ ಬೀಗದ ಕೈಗಳನು
ಮತ್ತು ನನ್ನ ಮನೆಯ ಹಕ್ಕುಗಳೆಲ್ಲವನ್ನು ಬಿಟ್ಟುಕೊಡುತ್ತಿದ್ದೇನೆ
ನಾನು ನಿಮ್ಮಂದ ಒಳ್ಳೆಯ ಮಾತುಗಳನ್ನು ಮಾತ್ರ ಕೇಳಲಿಚ್ಚಿಸುತ್ತೇನೆ\\
ನಾವುಗಳು ಬಹುಕಾಲ ನೆರೆಹೊರೆಯವರಾಗಿದ್ದೆವು
ಆದರೆ ನಾನು ಕೊಡುವುದಕ್ಕಿಂತ ನಿಮ್ಮಿಂದ ಹೆಚ್ಚಾಗಿಯೇ ಪಡೆದಿದ್ದೇನೆ
ದಿನಗಳು ಕಳೆದುಹೋಗಿದೆ
ಮತ್ತು ನನ್ನ ಕತ್ತಲ ಕೋಣೆಯ ಹಣತೆ ಹೊರಟುಹೋಗಿದೆ
ಕರೆ ಬಂದಿದೆ ಹಾಗೂ ನಾನು ಸನ್ನದ್ದನಾಗಿದ್ದೇನೆ ನನ್ನ ಪಯಣಕ್ಕೆ\\
ಪ್ರೇರಣೆ:"Farewell" by Rabindranatha Tagore
-ಮುಖಾ ಮುಖಿ-
ದಿನೇ ದಿನೇ ಕಳೆದಿದೆ ಓ ನನ್ನ ಜೀವನ ಪ್ರಭುವೇ!
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?
ಕೈ ಕಟ್ಟಿ ನಿಂತಿರುವೆ ಎಲ್ಲಾ ಪ್ರಪಂಚಗಳ ಪ್ರಭುವೇ!
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಏಕಾಂತತೆ ಹಾಗೂ ನಿಶಬ್ದವಾದ ನಿನ್ನ ಅಗಾಧವಾದ ಆಕಾಶದ ಕೆಳಗೆ
ಜರ್ಜರಿತ ಹೃದಯದೊಂದಿಗೆ ದೀನನಾಗಿ ನಿಂತಿರುವೆ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಇಂತಹ ಪ್ರಯಾಸದ ಜಗತ್ತಿನಲ್ಲಿ ಗೊಂದಲ , ದುಡಿಮೆ
ಮತ್ತು ಸಂಘರ್ಷವಿದೆ ವೇಗವಾಗಿ ಮುನ್ನಡೆಯುವ ಗುಂಪುಗಳಲ್ಲಿ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಮತ್ತು ಯಾವಾಗ ನನ್ನ ಕೆಲಸಗಳೆಲ್ಲ ಸಾಧ್ಯತೆಯಲ್ಲಿ ಆಗುವುದೋ ಈ ಪ್ರಪಂಚದಲ್ಲಿ
ಏಕಾಂಗಿ ಹಾಗೂ ಮಾತನಾಡದ ಸ್ಥಿತಿಯಲ್ಲಿದ್ದೇನೆ ಓ ದೊರೆಗಳ ದೊರೆಯೇ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಪ್ರೇರಣೆ : "Face to Face" by Rabindranatha Tagore
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?
ಕೈ ಕಟ್ಟಿ ನಿಂತಿರುವೆ ಎಲ್ಲಾ ಪ್ರಪಂಚಗಳ ಪ್ರಭುವೇ!
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಏಕಾಂತತೆ ಹಾಗೂ ನಿಶಬ್ದವಾದ ನಿನ್ನ ಅಗಾಧವಾದ ಆಕಾಶದ ಕೆಳಗೆ
ಜರ್ಜರಿತ ಹೃದಯದೊಂದಿಗೆ ದೀನನಾಗಿ ನಿಂತಿರುವೆ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಇಂತಹ ಪ್ರಯಾಸದ ಜಗತ್ತಿನಲ್ಲಿ ಗೊಂದಲ , ದುಡಿಮೆ
ಮತ್ತು ಸಂಘರ್ಷವಿದೆ ವೇಗವಾಗಿ ಮುನ್ನಡೆಯುವ ಗುಂಪುಗಳಲ್ಲಿ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಮತ್ತು ಯಾವಾಗ ನನ್ನ ಕೆಲಸಗಳೆಲ್ಲ ಸಾಧ್ಯತೆಯಲ್ಲಿ ಆಗುವುದೋ ಈ ಪ್ರಪಂಚದಲ್ಲಿ
ಏಕಾಂಗಿ ಹಾಗೂ ಮಾತನಾಡದ ಸ್ಥಿತಿಯಲ್ಲಿದ್ದೇನೆ ಓ ದೊರೆಗಳ ದೊರೆಯೇ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಪ್ರೇರಣೆ : "Face to Face" by Rabindranatha Tagore
-ಬಣ್ಣದ ಆಟಿಕೆ-
ಯಾವಾಗ ನಾ ನಿನಗೆ ಬಣ್ಣದ ಆಟಿಕೆ ತರುತಿರಲು, ಓ ನನ್ನ ಮಗುವೆ!
ನನಗೆ ಗೊತ್ತಾಯಿತು ಏಕೆ ಬಣ್ಣಗಳಾಟ ಮೋಡ ಹಾಗೂ ನೀರಿನ ಮೇಲೆ ನಡೆಯುತ್ತಿದೆಯೆಂದು
ಮತ್ತು ಏಕೆ ಹೂಗಳೆಲ್ಲಾ ಬಣ್ಣಗಳಿಂದ ಕೂಡಿ ನಗುತಿದೆಯೆಂದು
.... ಯಾವಾಗ ನಾ ನಿನಗೆ ಬಣ್ಣದ ಆಟಿಕೆ ತರುತಿರಲು, ಓ ನನ್ನ ಮಗುವೆ!\\
ಯಾವಾಗ ನಾ ಹಾಡಿದೆ ನೀನು ನೃತ್ಯ ಮಾಡಲು
ನನಗೆ ತಿಳಿಯಿತು ಏಕೆ ಎಲೆಗಳಿಂದ ಸಂಗೀತ ಹೊಮ್ಮುತಿದೆಯೆಂದು
ಮತ್ತು ಏಕೆ ತರಂಗಗಳು ತಮ್ಮ ದನಿಯನು ಜೊತೆಗೂಡಿಸಿವೆ
ಹೃದಯದಿಂದ ಕೇಳುತಿರುವ ಭುವಿಯೊಂದಿಗೆಂದು
.....ಯಾವಾಗ ನಾ ಹಾಡಿದೆ ನೀನು ನೃತ್ಯ ಮಾಡಲು\\
ಯಾವಾಗ ನಾ ತಂದೆ ಸಿಹಿ ತಿನಿಸುಗಳ ಬೊಗಸೆಯೋಡ್ಡಿದ ಕೈಗಳಿಗೆ
ನನಗೆ ತಿಳಿಯಿತು ಏಕೆ ಜೇನು ತುಂಬಿದೆ ಹೂವಿನ ಒಡಲಲ್ಲಿಯೆಂದು
ಮತ್ತು ಏಕೆ ಹಣ್ಣುಗಳು ರಹಸ್ಯವಾಗಿ ಸಿಹಿರಸವ ಬಚ್ಚಿಟ್ಟುಕೊಂಡಿದೆಯೆಂದು
....ಯಾವಾಗ ನಾ ತಂದೆ ಸಿಹಿ ತಿನಿಸುಗಳ ಬೊಗಸೆಯೋಡ್ಡಿದ ಕೈಗಳಿಗೆ\\
ಯಾವಾಗ ನಾ ಮುತ್ತಿಟ್ಟೆ ನಿನ್ನ ಕೆನ್ನೆಗೆ ನೀ ನಗಲೆಂದು ಓ ನನ್ನ ನಲ್ಲೆ
ನನಗೆ ನಿಚ್ಶಯವಾಯಿತು ಏಕೆ ಆನಂದದಿಂದ ಹೊನಲು ಹರಿದಿದೆ ಬೆಳಗಿನ ಆಕಾಶದಿಂದೆಂದು
ಮತ್ತು ಏಕೆ ಬೇಸಿಗೆಯ ತಂಗಾಳಿ ನನ್ನ ದೇಹದಲ್ಲಿ ಉಲ್ಲಾಸ ತಂದಿದೆಯೆಂದು
.....ಯಾವಾಗ ನಾ ಮುತ್ತಿಟ್ಟೆ ನಿನ್ನ ಕೆನ್ನೆಗೆ ನೀ ನಗಲೆಂದು ಓ ನನ್ನ ನಲ್ಲೆ \\
ಪ್ರೇರಣೆ: "Colored Toys" by Rabindranatha Tagore
ನನಗೆ ಗೊತ್ತಾಯಿತು ಏಕೆ ಬಣ್ಣಗಳಾಟ ಮೋಡ ಹಾಗೂ ನೀರಿನ ಮೇಲೆ ನಡೆಯುತ್ತಿದೆಯೆಂದು
ಮತ್ತು ಏಕೆ ಹೂಗಳೆಲ್ಲಾ ಬಣ್ಣಗಳಿಂದ ಕೂಡಿ ನಗುತಿದೆಯೆಂದು
.... ಯಾವಾಗ ನಾ ನಿನಗೆ ಬಣ್ಣದ ಆಟಿಕೆ ತರುತಿರಲು, ಓ ನನ್ನ ಮಗುವೆ!\\
ಯಾವಾಗ ನಾ ಹಾಡಿದೆ ನೀನು ನೃತ್ಯ ಮಾಡಲು
ನನಗೆ ತಿಳಿಯಿತು ಏಕೆ ಎಲೆಗಳಿಂದ ಸಂಗೀತ ಹೊಮ್ಮುತಿದೆಯೆಂದು
ಮತ್ತು ಏಕೆ ತರಂಗಗಳು ತಮ್ಮ ದನಿಯನು ಜೊತೆಗೂಡಿಸಿವೆ
ಹೃದಯದಿಂದ ಕೇಳುತಿರುವ ಭುವಿಯೊಂದಿಗೆಂದು
.....ಯಾವಾಗ ನಾ ಹಾಡಿದೆ ನೀನು ನೃತ್ಯ ಮಾಡಲು\\
ಯಾವಾಗ ನಾ ತಂದೆ ಸಿಹಿ ತಿನಿಸುಗಳ ಬೊಗಸೆಯೋಡ್ಡಿದ ಕೈಗಳಿಗೆ
ನನಗೆ ತಿಳಿಯಿತು ಏಕೆ ಜೇನು ತುಂಬಿದೆ ಹೂವಿನ ಒಡಲಲ್ಲಿಯೆಂದು
ಮತ್ತು ಏಕೆ ಹಣ್ಣುಗಳು ರಹಸ್ಯವಾಗಿ ಸಿಹಿರಸವ ಬಚ್ಚಿಟ್ಟುಕೊಂಡಿದೆಯೆಂದು
....ಯಾವಾಗ ನಾ ತಂದೆ ಸಿಹಿ ತಿನಿಸುಗಳ ಬೊಗಸೆಯೋಡ್ಡಿದ ಕೈಗಳಿಗೆ\\
ಯಾವಾಗ ನಾ ಮುತ್ತಿಟ್ಟೆ ನಿನ್ನ ಕೆನ್ನೆಗೆ ನೀ ನಗಲೆಂದು ಓ ನನ್ನ ನಲ್ಲೆ
ನನಗೆ ನಿಚ್ಶಯವಾಯಿತು ಏಕೆ ಆನಂದದಿಂದ ಹೊನಲು ಹರಿದಿದೆ ಬೆಳಗಿನ ಆಕಾಶದಿಂದೆಂದು
ಮತ್ತು ಏಕೆ ಬೇಸಿಗೆಯ ತಂಗಾಳಿ ನನ್ನ ದೇಹದಲ್ಲಿ ಉಲ್ಲಾಸ ತಂದಿದೆಯೆಂದು
.....ಯಾವಾಗ ನಾ ಮುತ್ತಿಟ್ಟೆ ನಿನ್ನ ಕೆನ್ನೆಗೆ ನೀ ನಗಲೆಂದು ಓ ನನ್ನ ನಲ್ಲೆ \\
ಪ್ರೇರಣೆ: "Colored Toys" by Rabindranatha Tagore
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)