ಸೋಮವಾರ, ಜುಲೈ 26, 2010

-ಯಾಚಕ ಹೃದಯ-

ಹೃದಯ ಕಲ್ಲಾಗಿ ಶೋಷಣೆಗೆ ರೋಸಿಹೋದಾಗ
ಕರುಣೆಯ ಮಳೆಗೆರೆಯೆ ಬಾ\\

ಆತ್ಮೀಯತೆ ಜನಜೀವನದಿಂದ ದೂರವಾದಾಗ
ಕಣ್ಣೀರ ಗೀತೆಯಾಗಿ ಬಾ\\

ಗೊಂದಲದ ಶಬ್ದ ಮಾಲಿನ್ಯ ಎಲ್ಲೆಡೆಯು ತುಂಬಿದಾಗ
ಓ ಮೌನ ದೇವರೇ ಶಾಂತಿ ಸಮಾಧಾನದೊಂದಿಗೆ ಬಾ\\

ಹೃದಯ ಬೇಡುತ್ತಿದೆ ಶರಣಾಗಿ ಮೂಲೆಯಲ್ಲಿ ಕುಳಿತು
ಓ ಎನ್ನ ಸ್ವಾಮಿಯೇ ಎಲ್ಲಾ ತಡೆಗೋಡೆಗಳನ್ನು ಮುರಿದು ಧೀಕ್ಷಾಬದ್ಧನಾಗಿ ಬಾ\\

ಮನಸ್ಸು ಕುರುಡಾಗಿದೆ ಬೇಡಿಕೆ, ಕತ್ತಲು ಹಾಗೂ ಕೊಳಕಿನಿಂದ
ಓ ಪವಿತ್ರಾತ್ಮನೆ ಎಚ್ಚರಗೊಳಿಸು, ಅರಿವಿನ ಬೆಳಕು ಮೊಳಗಿಸು ಬಾ\\

ಪ್ರೇರಣೆ:"Beggarly Heart" by Rabindranath Tagore

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ